ಪತ್ರಕರ್ತ ಪಾವಗಡ ಕೃಷ್ಣಪ್ಪಗೆ ಪ್ರೆಸ್ ಕ್ಲಬ್ ನಿಂದ ಶ್ರದ್ದಾಂಜಲಿ, ನುಡಿ ನಮನ ಕಾರ್ಯಕ್ರಮ 

Kalabandhu Editor
1 Min Read

ಬೆಂಗಳೂರು: ಹಿರಿಯ ಪತ್ರಕರ್ತ ಪಾವಗಡ ಕೃಷ್ಣಪ್ಪ ಅವರ ಶ್ರದ್ದಾಂಜಲಿ,ನುಡಿ ನಮನ ಕಾರ್ಯಕ್ರಮ ಬೆಂಗಳೂರು ಪ್ರೆಸ್ ಕ್ಲಬ್ ವತಿಯಂದ ಇಂದು ನಡೆಯಿತು.

ಹಿರಿಯ ಪತ್ರಕರ್ತರಾದ ಇ.ವಿ.ಸತ್ಯನಾರಾಯಣ, ಪೊನ್ನಪ್ಪ, ಆರ್.ಪಿ.ಎಸ್ ರೆಡ್ಡಿ, ಮೋಹನ್ ಸಾವಂತ್,ಉದಯ ಟಿವಿ ನಾರಾಯಣ, ಪ್ರೆಸ್ ಕ್ಲಬ್ ಪ್ರಧಾನಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಉಪಾಧ್ಯಕ್ಷ ಮೋಹನ್ ಕುಮಾರ್ ಬಿ.ಎನ್ ಹಾಗೂ ಗುಬ್ಬಿ ಕೃಷ್ಣಪ್ಪ ಪಾವಗಡ ಕೃಷ್ಣಪ್ಪ ಅವರು ಪತ್ರಿಕೋದ್ಯಮ ಕ್ಷೇತ್ರ ಹಾಗೂ ಹಿರಿಯ ಪತ್ರಕರ್ತರ ವೇದಿಕೆಯಡಿ ಪತ್ರಕರ್ತರ ಪಿಂಚಣಿಗಾಗಿ ಶ್ರಮಿಸಿದ ಸೇವೆಯನ್ನು ಸ್ಮರಿಸಿದರು.

ಹಿರಿಯ ಪತ್ರಕರ್ತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಲ್ಲಿ ಹಿರಿಯ ಪತ್ರಕರ್ತರ ಪಿಂಚಣಿ ವಿಚಾರದಲ್ಲಿ ಇರುವ ಗೊಂದಲವನ್ನು ನಿವಾರಿಸುವ ಬಗ್ಗೆ ಮೊದಲ ಆದ್ಯತೆ ನೀಡಬೇಕು,ಕೇರಳ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಇರುವಂತೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಗಮನ ಸಳೆಯುವ ಕುರಿತು ಚರ್ಚೆ ನಡೆಸಲಾಯಿತು.

ಪತ್ರಕರ್ತರಾದ ನಂಜುಂಡೇ ಗೌಡ, ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಮಮ್ತಾಜ್ ಅಲೀಂ, ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಧರಣೇಶ್ ಬೂಕನಕೆರೆ, ಪತ್ರಕರ್ತರಾದ ಮಂಜುನಾಥ್ ನಾಯಕ್, ವಿರೂಪಾಕ್ಷ ಹಾಲಗಳಲೆ, ಪಾವಗಡ ರೈತಪರ ಹೋರಾಟಗಾರ ನಾಗಭೂಷಣ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Share this Article