ದಿನಾಂಕ : 12-09-2023
ಸಮಯ: ಬೆಳಿಗ್ಗೆ – 10:00 ಗಂಟಗೆ
ಸ್ಥಳಃ ಶ್ರೀ ವಾಲ್ಮೀಕಿ ಮಹಾ ಸಂಸ್ಥಾನ ವಿದ್ಯಾಪೀಠ (ರಿ.) ರಾಜನಹಳ್ಳಿ.
ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸನ್ಮಾನ್ಯ ಶ್ರೀ ಬಿ.ಪಿ ಹರೀಶರವರು ಮಾನ್ಯ ಶಾಸಕರು ಹರಿಹರ ಈ ಕಾಯಕ್ರಮದ ಅಧ್ಯಕ್ಷತೆ ವಹಿಸಿ ನಂತರ ಉದ್ಘಾಟನೆ ಯನ್ನು ನೇರವೇರಿಸಿದರು.
ಶ್ರೀ ಹನುಮಂತಪ್ಪ ಎಂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಧ್ಯಕ್ಷರು ತಾಲ್ಲೂಕು ಮಟ್ಟದ ಕ್ರೀಡಾಕೂಟ. ಹರಿಹರ ಮತ್ತು ಶ್ರೀಮತಿ ಮಂಜುಳಾ ಎನ್.ಪಿ ತಾಲ್ಲೂಕು ದೈಹಿಕ ಶಿಕ್ಷಣ ಪರೀ ವೀಕ್ಷಕರು ಹಾಗೂ ಕಾರ್ಯದರ್ಶಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟ ಹರಿಹರ ಮತ್ತು ಶ್ರೀ ಕೆ.ಬಿ.ಮಂಜುನಾಥ ಧರ್ಮದರ್ಶಿಗಳು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಗೌರವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಗಮಿಸಿದ ಎಲ್ಲಾ ಶಾಲೆಯ ಮುಖ್ಯ ಶಿಕ್ಷರರು, ದೈಹಿಕ ಶಿಕ್ಷಕರು. ಸಹ ಶಿಕ್ಷರರು, ಹಾಗೂ ಎಲ್ಲಾ ಕ್ರೀಡಾಪಟುಗಳು ಹಾಗೂ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.